Subscribe Now!

Get the Latest Insights

ಕರ್ನಾಟಕ ರಾಜ್ಯೋತ್ಸವ

ಧಾರವಾಡದ ವಿದ್ಯಾಗಿರಿಯಲ್ಲಿರುವ ಜನತಾ ಶಿಕ್ಷಣ ಸಮಿತಿಯ ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ದಿನಾಂಕ 1.11.2023 ರಂದು ಕರ್ನಾಟಕ ರಾಜ್ಯೋತ್ಸವವನ್ನು ಶ್ರದ್ಧೆ, ಸಡಗರ ಮತ್ತು ಭಕ್ತಿಯಿಂದ ಆಚರಿಸಲಾಯಿತು.
ಈ ಕಾರ್ಯಕ್ರಮಕ್ಕೆ ಶಾಲೆಯ ಪ್ರಾಚಾರ್ಯೆ ಶ್ರೀಮತಿ ಉಷಾ ಸಂತೋಷ್ ಸಹ ಸಂಯೋಜಕರಾದ ನಿರ್ಮಲಾ ಪಾಟೀಲ್, ಸಾವಿತ್ರಿ ಗಾತಾಡೆ ಮತ್ತು ಕಮಲಾಕ್ಷಿ ಸಣ್ಣಕ್ಕಿ ಇವರು ಉಪಸ್ಥಿತರಿದ್ದರು.
ಕನ್ನಡ ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಮಕ್ಕಳಿಂದ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಅಂದರೆ ನಾಡಗೀತೆ, ಕನ್ನಡದ ಹಿರಿಮೆಯನ್ನು ಕುರಿತಾದ ಹಾಡುಗಳು, ಭಾಷಣ ಮತ್ತು ನೃತ್ಯಗಳು ಜರುಗಿದವು.

 

Share the Post:

Related Posts